ಹೊಂಡಗಳ ಸ್ವಚ್ಛತೆಗೆ ಆದ್ಯತೆ ಕೊಡಲಾಗುವದು. ಪಾಲಿಕೆಯಿಂದ ವಿದ್ಯುತ್ ಕರ ಭರ್ತಿಗಾಗಿ
ಗಣೇಶ್ ಉತ್ಸವ ಎಲ್ಲ ಮಂಡಳಿಗಳಿಗೆ ಹಣಕಾಸಿನ ಅನುಕೂಲ ಮಾಡಲಾಗುವದು. ಗಣೇಶ ಉತ್ಸವದ ಯಶಸ್ವಿಗೆ ಪಾಲಿಕೆಯಿಂದ ಸಕಲ ಸಹಕಾರವನ್ನೂ ನೀಡಲಾಗುವುದೆಂದು ಹೇಳಿದರು.
ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು ಮಾತನಾಡಿ, 11 ದಿನಗಳ ಗಣೇಶ ಉತ್ಸವದ ಸಕಲಸಿದ್ಧತೆಗೆ ಆದ್ಯತೆ ನೀಡುವುದರ ಜೊತೆಗೆ ಮೂರ್ತಿಗಳ ವಿಸರ್ಜನಾ ಸಂದರ್ಭದಲ್ಲಿ ಹೊಂಡಗಳ ಬಳಿ ಕ್ರೇನ್ ಗಳು, ತಂತ್ರಜ್ಞರು ಹಾಗೂ ಮುಳುಗು ತಜ್ಞರನ್ನು ನೇಮಿಸಲಾಗುವುದೆಂದು ಹೇಳಿದರು.
ಪಾಲಿಕೆ ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ್ ಮಾತನಾಡಿದರು.
ಮೇಯರ್ ಪ್ರೀತಿ ಕಾಮಕರ,
ಪ್ರೊಬೇಷನರಿ ಡಿಸಿ ರೋಹಿತ್ ಸಿಂಗ್, ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಬಿ. ಬಸರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪಾಲಿಕೆ ಪರಿಷತ್ ಕಾರ್ಯದರ್ಶಿ ಲಕ್ಷ್ಮೀ ನಿಪ್ಪಾಣಿಕರ್, ವಿವಿಧ ಇಲಾಖೆಗಳ ಅಧಿಕಾರಿಗಳು, ವೇದಿಕೆಯಲ್ಲಿದ್ದರು.
ಗಣಪತಿ ಉತ್ಸವ ಮಹಾಮಂಡಳ ಅಧ್ಯಕ್ಷ ವಿಕಾಸ್ ಕಲಘಟಗಿ,ಉಪಾಧ್ಯಕ್ಷ ಸಾಗರ ಪಾಟೀಲ ಸೇರಿದಂತೆ ಇತರೆ ಪದಾಧಿಕಾರಿಗಳು ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಮನವಿ ಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಅರ್ಪಿಸಿದರು. ಪಾಲಿಕೆ ಪರಿಸರ ಅಭಿಯಂತರ ಹನುಮಂತ ಕಲಾದಗಿ ಸ್ವಾಗತಿಸಿ ವಂದಿಸಿದರು.ನಗರದ ಗಣೇಶ ಉತ್ಸವ ಮಂಡಳಿಗಳ ಪದಾಧಿಕಾರಿಗಳು ಮೂರ್ತಿಕಾರರು ಉಪಸ್ಥಿತರಿದ್ದರು.







